Tuesday, August 25, 2026
  • About Us
  • Contact Us
  • Privacy Policy
  • Disclaimer
SS9 TV Kannada
ಸತ್ಯ  •  ವಿಶ್ವಾಸ  •  ಪರಿಣಾಮ
VOICE OF KARNATAKA
NEWS THAT MATTERS
Advertisement
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ
No Result
View All Result
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ
No Result
View All Result
SS9 TV Kannada
No Result
View All Result
Home ಹುಬ್ಬಳ್ಳಿ-ಧಾರವಾಡ

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ

SS9 TV by SS9 TV
August 24, 2026
in ಹುಬ್ಬಳ್ಳಿ-ಧಾರವಾಡ
0
5.1k
SHARES
15.6k
VIEWS
Share on FacebookShare on Twitter

ಹುಬ್ಬಳ್ಳಿ: ಮಳೆ ಕೊರತೆಯಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಬೇಕು ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಬರಗಾಲ ಮತ್ತು ರೈತರ ಸಮಸ್ಯೆಗಳ ಕುರಿತು ಎಲ್ಲ ಪಕ್ಷಗಳ ಶಾಸಕರು ಗಂಭೀರವಾಗಿ ಚರ್ಚೆ ನಡೆಸಬೇಕು ಎಂದರು.

RelatedPosts

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ

ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

ವಿರೋಧ ಪಕ್ಷದವರು ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಆದರೆ, ಈ ವಿಚಾರದಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸದನದಲ್ಲಿ ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆದರೆ ರೈತರಿಗೆ ಅನುಕೂಲವಾಗಲಿದೆ ಎಂದರು.

28 ರೈತರ ವಿರುದ್ಧ ಪ್ರಕರಣ: ಆಕ್ರೋಶ

2025ರ ಡಿಸೆಂಬರ್‌ನಲ್ಲಿ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಕೋರಮಂಗಲದಲ್ಲಿರುವ ಪರಿಸರ ಭವನದ ಎದುರು ರೈತ ಸೇನಾ ಕರ್ನಾಟಕ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಎಲ್ಲ ಇಲಾಖೆಗಳ ಅನುಮತಿ ಪಡೆದುಕೊಂಡು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೂ, ಎಂಟು ತಿಂಗಳ ಬಳಿಕ ರೈತರಿಗೆ ನೋಟಿಸ್ ನೀಡಿ ಪ್ರಕರಣ ದಾಖಲಿಸಲಾಗಿದೆ ಎಂದು ವೀರೇಶ ಸೊಬರದಮಠ ಆರೋಪಿಸಿದರು.

ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಹಾಗೂ ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ ಎಂದು ಆರೋಪಿಸಿ 28 ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಈ ಕ್ರಮವನ್ನು ರೈತ ಸೇನಾ ಕರ್ನಾಟಕ ಖಂಡಿಸುತ್ತದೆ ಎಂದರು.

ಸರ್ಕಾರ ಕೂಡಲೇ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಅಲ್ಲದೇ ಮಡಿವಾಳ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸೇನಾ ಕರ್ನಾಟಕದ ಮುಖಂಡರಾದ ಗುರು ರಾಯನಗೌಡ್ರ, ಮಲ್ಲಣ್ಣ ಆಲೇಕಾರ ಹಾಗೂ ವಿರುಪಾಕ್ಷ ರಾಯಣ್ಣನವರ ಉಪಸ್ಥಿತರಿದ್ದರು.

SendShare2054Tweet1284Share
Previous Post

ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

Next Post

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ

SS9 TV

SS9 TV

RelatedPosts

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ

August 24, 2026
ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ
ಕರ್ನಾಟಕ

ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

August 24, 2026

Leave a Reply Cancel reply

Your email address will not be published. Required fields are marked *

Recent Posts

  • ರಾಣೇಬೆನ್ನೂರು ನಗರದ ಹೃದಯ ಭಾಗದಲ್ಲಿರೋ ಕೆರೆ ಈಗ ಸೊಳ್ಳೆಯ ತಾಣ.
  • ರೈತರ ಬೆಳೆ ಹಾನಿ ಪರಿಶೀಲಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ…
  • ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ
  • ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ
  • ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

Recent Comments

No comments to show.
SS9 TV Kannada

ಕನ್ನಡದ ನೆಲದ, ನಿಷ್ಠುರ ಮತ್ತು ವಿಶ್ವಾಸಾರ್ಹ ಸುದ್ದಿಗಳಿಗಾಗಿ SS9 TV ಕನ್ನಡ

ವಿಭಾಗಗಳು

  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ

ಮಾಹಿತಿ

  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Terms & Conditions
  • Disclaimer
  • Editorial Policy

ಉಪಯುಕ್ತ ಲಿಂಕ್‌ಗಳು

  • Advertise With Us
  • Careers
  • Feedback
  • Sitemap
  • ವೀಡಿಯೊ
  • ಫೋಟೋ ಗ್ಯಾಲರಿ

ಸಂಪರ್ಕಿಸಿ

  • SS9 TV Kannada
    Hubballi-Dharwad,
    Karnataka – 580020
  • +91 97392 86826
  • news@ss9tvkannada.com
© 2026 SS9 TV Kannada. All Rights Reserved. Website by Extro Marketing Agency TRUTH. TRUST. IMPACT.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ

© 2026 SS9 TV Kannada. All Rights Reserved.