Tuesday, August 25, 2026
  • About Us
  • Contact Us
  • Privacy Policy
  • Disclaimer
SS9 TV Kannada
ಸತ್ಯ  •  ವಿಶ್ವಾಸ  •  ಪರಿಣಾಮ
VOICE OF KARNATAKA
NEWS THAT MATTERS
Advertisement
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ
No Result
View All Result
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ
No Result
View All Result
SS9 TV Kannada
No Result
View All Result
Home ಕರ್ನಾಟಕ

ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

SS9 TV by SS9 TV
August 24, 2026
in ಕರ್ನಾಟಕ, ಹುಬ್ಬಳ್ಳಿ-ಧಾರವಾಡ
Reading Time: 1 min read
0
5.1k
SHARES
15.6k
VIEWS
Share on FacebookShare on Twitter

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ವಿಚಾರ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ. ಬಿಜೆಪಿ ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ ಅಬ್ಬಯ್ಯ, ಹುಡಾ ಸಿಡಿಪಿಯಲ್ಲಿ ಈ ಸ್ಥಳದಲ್ಲಿ ರಸ್ತೆ ಇರುವುದಾಗಿ ದಾಖಲಾಗಿದೆ. 2023ರಲ್ಲಿ ಹು-ಧಾ ಮಹಾನಗರ ಪಾಲಿಕೆ ರಾಜ್ಯ ಪುರಾತತ್ವ ಇಲಾಖೆಯನ್ನು ಸಂಪರ್ಕಿಸಿತ್ತು. ಆಗ ಪುಷ್ಕರಣಿ ಇಲ್ಲ ಎಂದು ಇಲಾಖೆ ತಿಳಿಸಿತ್ತು. ಇದೇ ಆಧಾರದ ಮೇಲೆ ಪಾಲಿಕೆ ರಸ್ತೆ ಕಾಮಗಾರಿಗೆ ಆದೇಶ ನೀಡಿದೆ ಎಂದು ಸ್ಪಷ್ಟಪಡಿಸಿದರು.

RelatedPosts

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ

ಬಿಜೆಪಿಯವರ ಬಳಿ ದಾಖಲೆಗಳಿದ್ದರೆ ಕಾನೂನು ಹೋರಾಟ ಮಾಡಲಿ ಎಂದು ಸವಾಲು ಹಾಕಿದ ಅಬ್ಬಯ್ಯ, ಜಾತಿ-ಧರ್ಮದ ಹೆಸರಿನಲ್ಲಿ ಹೋರಾಟ ಮಾಡುವ ಬದಲು ದಾಖಲೆಗಳ ಮೂಲಕ ಸತ್ಯವನ್ನು ಹೊರತರಲಿ ಎಂದರು.

ಇನ್ನು, ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ವಿಚಾರವಾಗಿ ನಡೆದ ಹೋರಾಟದಿಂದ ಹುಬ್ಬಳ್ಳಿಯ ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರ 10 ವರ್ಷ ಹಿಂದಕ್ಕೆ ಹೋಗಿತ್ತು ಎಂದು ಅಬ್ಬಯ್ಯ ಆರೋಪಿಸಿದರು. ದೇವಸ್ಥಾನದ ಸುತ್ತಮುತ್ತ ಹಿಂದೆಯೇ ಹಲವು ಕಾಮಗಾರಿಗಳು ನಡೆದಿದ್ದರೂ ಆಗ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಈಗ ರಸ್ತೆ ಕಾಮಗಾರಿ ವಿಚಾರದಲ್ಲಿ ಧರ್ಮದ ಹೆಸರಿನಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ದೂರಿದರು.

ಹಳೇ ಹುಬ್ಬಳ್ಳಿಯಲ್ಲಿ ದಲಿತರು ಸೇರಿದಂತೆ ಸಾಕಷ್ಟು ಹಿಂದೂಗಳು ವಾಸಿಸುತ್ತಿದ್ದು, ಅವರಿಗೆ ಮೂಲಸೌಕರ್ಯ ಕಲ್ಪಿಸುವುದು ಬೇಡವೇ? ಎಂದು ಪ್ರಶ್ನಿಸಿದ ಶಾಸಕರು, ಪುಷ್ಕರಣಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಮುಂದಾದರೆ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ದೇವಸ್ಥಾನಕ್ಕೆ ಶಾಸಕರ ಭೇಟಿ

ಪುಷ್ಕರಣಿ ವಿವಾದದ ಹಿನ್ನೆಲೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಭಾನುವಾರ ಶ್ರೀ ಭವಾನಿ ಶಂಕರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಪ್ರಾಂಗಣ ಹಾಗೂ ಮುಂಭಾಗದ ರಸ್ತೆಯನ್ನು ಪರಿಶೀಲಿಸಿದ ಅವರು, ಪುಷ್ಕರಣಿಯ ಕುರುಹು ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು.

ಈ ವೇಳೆ ರಜತ್ ಉಳ್ಳಾಗಡ್ಡಿಮಠ, ಅಲ್ತಾಫ್ ಹಳ್ಳೂರ, ಗುರುನಾಥ ಉಳ್ಳಿಕಾಶಿ, ಶ್ರೀನಿವಾಸ ಬೆಳದಡಿ, ರಜನಿಕಾಂತ ಬಿಜವಾಡ, ಪ್ರಭು ಪ್ರಭಾಕರ, ಮಾರುತಿ ದೊಡ್ಡಮನಿ, ಸಂತೋಷ ಪೂಜಾರ, ಮಂಜುನಾಥ ಉಳ್ಳಿಕಾಶಿ, ಶ್ರೀಶೈಲ ಛಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪುಷ್ಕರಣಿ ಇತ್ತೇ? ರಸ್ತೆ ಕಾಮಗಾರಿ ಕಾನೂನುಬದ್ಧವೇ? ಎಂಬ ಪ್ರಶ್ನೆಗಳ ನಡುವೆ ಹಳೇ ಹುಬ್ಬಳ್ಳಿ ವಿವಾದ ಮತ್ತಷ್ಟು ತೀವ್ರಗೊಂಡಿದೆ.

SendShare2054Tweet1284Share
Previous Post

ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಎಡವಟ್ಟು

Next Post

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ

SS9 TV

SS9 TV

RelatedPosts

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ

August 24, 2026
ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ
ಹುಬ್ಬಳ್ಳಿ-ಧಾರವಾಡ

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ

August 24, 2026

Leave a Reply Cancel reply

Your email address will not be published. Required fields are marked *

Recent Posts

  • ರಾಣೇಬೆನ್ನೂರು ನಗರದ ಹೃದಯ ಭಾಗದಲ್ಲಿರೋ ಕೆರೆ ಈಗ ಸೊಳ್ಳೆಯ ತಾಣ.
  • ರೈತರ ಬೆಳೆ ಹಾನಿ ಪರಿಶೀಲಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ…
  • ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ
  • ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ
  • ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

Recent Comments

No comments to show.
SS9 TV Kannada

ಕನ್ನಡದ ನೆಲದ, ನಿಷ್ಠುರ ಮತ್ತು ವಿಶ್ವಾಸಾರ್ಹ ಸುದ್ದಿಗಳಿಗಾಗಿ SS9 TV ಕನ್ನಡ

ವಿಭಾಗಗಳು

  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ

ಮಾಹಿತಿ

  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Terms & Conditions
  • Disclaimer
  • Editorial Policy

ಉಪಯುಕ್ತ ಲಿಂಕ್‌ಗಳು

  • Advertise With Us
  • Careers
  • Feedback
  • Sitemap
  • ವೀಡಿಯೊ
  • ಫೋಟೋ ಗ್ಯಾಲರಿ

ಸಂಪರ್ಕಿಸಿ

  • SS9 TV Kannada
    Hubballi-Dharwad,
    Karnataka – 580020
  • +91 97392 86826
  • news@ss9tvkannada.com
© 2026 SS9 TV Kannada. All Rights Reserved. Website by Extro Marketing Agency TRUTH. TRUST. IMPACT.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ

© 2026 SS9 TV Kannada. All Rights Reserved.